ಕರುಳ ಕೊರೆ

ಕಳವಳದ ಮೂರ್ತಿ ತಾ ಕಂಗೆಟ್ಟು ನಿಂತಿಹುದು
ತಳಮಳಕೆ ತೀರವೆಲ್ಲಿರುವದವನ
ಹುಳುವು ಹುಪ್ಪಡಿಗಿಂತ ಕೀಳಾದಬಾಳುವೆಯ
ಅಳುತಬಾಳುತ್ತಿಹನು ಸಾವಬಯಸಿ

ಗೇಣು ಹೊಟ್ಟೆಯ ತುಂಬೆ ಬೊಟ್ಟು ಬಟ್ಟೆಯ ಹೂರೆಯೆ
ಪ್ರಾಣವನೆ ಒಪ್ಪಿಸಿಹ ಸಿರಿವಂತಗೆ
ಗಾಣದೊಳು ಸಿಕ್ಕಿರುವ ಕಬ್ಬಿನೊಲು ಜಬ್ಬಾಗಿ
ತ್ರಾಣವೆಲ್ಲವ ಕಳೆದುಕೊಂಡಿರುವನು

ರೋಮರೋಮಗಳಲ್ಲಿ ತೂರಿ ಬರುತಿದೆ ನೋವು
ಭೂಮಂಡಲದಿ ಅವಗೆ ತಾಣವಿಲ್ಲ
ಸಾಮಗಾನದಿ ಶಾಂತಿದೇವತೆಯ ಕರೆಯುವರು
ಪ್ರೇಮವಿರಹಿತ ಪೃಥ್ವಿಗೆಲ್ಲಿ ಶಾಂತಿ ?

ಸತ್ತಿಹರು ಅಜ್ಜಾನು ಅಬ್ಜಜನ ನರಳುತ್ತ
ಬಿತ್ತಿಹರು ಜನಮನದಿ ಕ್ರಾಂತಿಬೀಜ
ಹೊತ್ತಲಿದೆ ಆರದದು ಎಂದಿಗೂ ಎಚ್ಚರವು
ನೆತ್ತಿಯಲಿ ಕಣ್ಣುಳ್ಳ ಧನದೊಡೆಯನೇ

ಮಾನವನೆ ನಿನೊಬ್ಬ ? ಮಾನವರ ಮರುಕವನು
ನೀನರಿಯದಿಹೆಯಲ್ಲ ಕಲ್ಲೆದೆಯವ

ಜನ್ನದಲಿ ಆಹುತಿಯ ಹಾಕುತಿರುವರು ಅವರು
ಧನ್ಯರಾಗುವರವರು ಸಿದ್ದಿಯಲ್ಲಿ
*****
(ಮೈಕೆಲ್ ಆಂಜಲೋನ Dying slave ಎಂಬ ಚಿತ್ರ ನೋಡಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೪
Next post ರಾವಣಾಂತರಂಗ – ೧೨

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys